ಮಾರ್ದನಿ
...ನಮ್ಮ ಪ್ರತಿಧ್ವನಿ
ಶನಿವಾರ, ನವೆಂಬರ್ 17, 2018
ಗುರುವಾರ, ನವೆಂಬರ್ 15, 2018
£ÀªÀÄä ¥Àj¸ÀgÀ £ÀªÀÄä
dªÁ¨ÁÝj
ಭಾನುವಾರ, ಮಾರ್ಚ್ 4, 2018
ಗುರುವಾರ, ಜನವರಿ 18, 2018
ಮಂಗಳವಾರ, ಜನವರಿ 2, 2018
Bisleri goes local with regional language labels
Through this initiative, Bisleri intends to connect with the consumers in their mother tongue Director of Marketing at Bisleri International Pvt. Ltd., said, “India being a multi-lingual country, people prefer communication in their local language too. Labels in local languages will be emotionally appealing to consumers. Also, consumers will be able to recognize the genuine Bisleri bottle and avoid buying counterfeit products or products which spell differently but look the same. A large number of consumers in our country are not comfortable with English. Bisleri bottles now carry brand name in both English and local language to ensure that the end consumer gets Bisleri when he/she asks for and does not mistake any other brand for Bisleri.”
“Bisleri has 122 bottling plants present across India and this change is being made for all these plants for all pack sizes. All label manufacturers have to change the plate on which they are printing the label and that’s an investment we’ve had to make.” added Ghosh.
Through this initiative, Bisleri intends to connect with the consumers in their mother tongue. Labels are released in several local languages like Hindi in Delhi, Rajasthan, Uttaranchal, Uttar Pradesh, Himachal Pradesh, Madhya Pradesh, Bihar, Jharkhand and Chhattisgarh; Marathi language labels in Maharashtra and Goa, Gujarati in Gujarat, Punjabi in Punjab, Tamil in Tamil Nadu, Telugu in Andhra Pradesh and Telangana, Assamese in Assam & North East, Malayalam in Kerala, Kannada in Karnataka, Bengali in West Bengal, Oriya in Orissa, across different SKUs.
ಶುಕ್ರವಾರ, ಡಿಸೆಂಬರ್ 1, 2017
ಭಾನುವಾರ, ಸೆಪ್ಟೆಂಬರ್ 3, 2017
ಟೈಮ್ ಝೋನ್
ಆಲೋಚಿಸಿ...
ಜಗತ್ತಿನ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಟೈಮ್ ಝೋನ್ ಇದೆ. ಭಾರತದಲ್ಲಿ ಕತ್ತಲು ಕವಿದಿದ್ದರೆ, ಇನ್ಯಾವುದೋ ದೇಶದ ಜನ ಆಗಷ್ಟೇ ಮೈ ಮುರಿದು ಏಳುತ್ತಿರುತ್ತಾರೆ. ಇನ್ನೆಲ್ಲೋ ಮಧ್ಯಾಹ್ನದ ಸುಡು ಬಿಸಿಲು ನೆತ್ತಿ ಸುಡುತ್ತಿರುತ್ತದೆ. ಕ್ಯಾಲಿಫೋರ್ನಿಯಾಕ್ಕಿಂತಲೂ ನ್ಯೂಯಾರ್ಕ್ ಮೂರು ಗಂಟೆ ಮುಂದಿದೆ. ನ್ಯೂಯಾರ್ಕ್ನಲ್ಲಿ ಬೆಳಗ್ಗೆ ಆರು ಗಂಟೆಯಾಗಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಗಂಟೆ ಮೂರಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನ್ಯೂಯಾರ್ಕ್ಗಿಂತ ಕ್ಯಾಾಲಿಫೋರ್ನಿಯಾ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತದೆಯೇ?
ಯಾರೋ ಒಬ್ಬ ಹುಡುಗ 22 ವರ್ಷಕ್ಕೇ ಪದವೀಧರನಾದರೂ ಒಂದು ಒಳ್ಳೆಯ ಕೆಲಸ ಪಡೆಯಲು ಐದು ವರ್ಷ ಕಾಯಬೇಕಾದೀತು. ಆದರೆ ಇನ್ಯಾರೋ ಒಬ್ಬ 25ನೇ ವಯಸ್ಸಿಗೆ ಕಂಪನಿಯ ಸಿಇಒ ಆಗಿ, 50 ವರ್ಷಕ್ಕೇ ಸತ್ತು ಹೋಗಿ ಬಿಡಬಹುದು.
ಇನ್ನೊಬ್ಬ 52ನೇ ವರ್ಷದಲ್ಲಿ ಸಿಇಒ ಆಗಿ 90 ವರ್ಷದವರೆಗೆ ಬದುಕಿದ. ನಿಮ್ಮಲ್ಲಿ ಎಷ್ಟೋ ಮಂದಿ ಇನ್ನೂ ಅವಿವಾಹಿತರಿದ್ದೀರಿ. ಆದರೆ ಕೆಲವರಿಗೆ ಮದುವೆಯಾಗಿ, ಈಗಾಗಲೇ ಮಕ್ಕಳಿವೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ 55ನೇ ವರ್ಷದಲ್ಲಿ ನಿವೃತ್ತಿ ಹೊಂದಿದ. ಆದರೆ ಡೊನಾಲ್ಡ್ ಟ್ರಂಪ್ನ ರಾಜಕೀಯ ಜೀವನ ಆರಂಭವಾಗಿದ್ದೇ 70ನೆ ವರ್ಷದಲ್ಲಿ!
ಎಷ್ಟೊಂದು ವಿಚಿತ್ರ ಅಲ್ಲವೇ ಇದು! ಹೇಗೆ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ಟೈಮ್ ಝೋನ್ (ಸಮಯದಲ್ಲಿ ವ್ಯತ್ಯಾಸ) ಅನ್ನುವುದು ಇದೆಯೋ, ಪ್ರತಿ ಮನುಷ್ಯನೂ ತನ್ನದೇ ಆದ ಟೈಮ್ ಝೋನ್ ಪ್ರಕಾರ ಬದುಕುತ್ತಿದ್ದಾನೆ. ನಿಮ್ಮ ಸಹಪಾಠಿಯೋ, ಸಹೋದ್ಯೋಗಿಯೋ ಜೀವನದಲ್ಲಿ ನಿಮಗಿಂತ ಮುಂದೆ ಹೋಗುತ್ತಿದ್ದಾನೆಂದು ಅನಿಸುತ್ತದೆ. ಇನ್ನೂ ಕೆಲವರು ನಿಮಗಿಂತ ಹಿಂದೆಯೇ ಇದ್ದಾರೆಂದು ನೀವು ಸಮಾಧಾನ ಪಟ್ಟುಕೊಳ್ಳುತ್ತೀರಿ. ಆದರೆ ಎಲ್ಲರೂ ತಮ್ಮ ತಮ್ಮ ಟೈಮ್ ಝೋನ್ ಪ್ರಕಾರ ತಮ್ಮ ಜೀವನದ ಓಟದಲ್ಲಿದ್ದಾರೆ. ಹಾಗಾಗಿ ಯಾರ ಮೇಲೂ ಅಸೂಯೆ ಪಡಬೇಡಿ, ಯಾರನ್ನೂ ಅಪಮಾನಿಸಬೇಡಿ. They are in their TIME ZONE, and you are in yours!
ನಮ್ಮ ನಮ್ಮ ಸಮಯ ಯಾವಾಗ ಬರುತ್ತದೆಂದು ತಾಳ್ಮೆಯಿಂದ ಕಾಯುತ್ತಾ ಕೆಲಸ ಮಾಡುತ್ತಿರುವುದೇ ಜೀವನ. ಚಿಂತೆ ಬೇಡವೇ ಬೇಡ.
ನೀವು ಯಾರಿಗಿಂತಲೂ ಮುಂದೆ ಹೋಗಿಲ್ಲ, ಯಾರಿಗಿಂತಲೂ ಹಿಂದೆ ಬಿದ್ದಿಲ್ಲ. ನೀವು ನಿಮ್ಮ ಕಾಲಚಕ್ರದ ಪ್ರಕಾರ ನಡೆಯುತ್ತಿದ್ದೀರಿ ಅಷ್ಟೇ. ನೀವೆಷ್ಟೇ ನಿಧಾನವಾಗಿ ನಡೆದರೂ, ವೇಗವಾಗಿ ನಡೆದರೂ ಗುರಿ ತಲುಪುವುದು ನಿಮ್ಮ ಟೈಮ್ ಝೋನ್ ಪ್ರಕಾರವೇ!
ಕಾಲಾಯ ತಸ್ಮೈ ನಮ: ✍🏻
ಸೋಮವಾರ, ಮಾರ್ಚ್ 6, 2017
ಮಂಗಳವಾರ, ಫೆಬ್ರವರಿ 28, 2017
· PÁªÀå
· £ÁlPÀ
· PÀxÁ
· ¸ÀA¸ÀÌøw
· ªÀÄ»¼É
· ¹æÃ
· PÀĪÉA¥ÀÄ
· PÁgÀAvÀ
· PÁzÀA§j
· ¸ÀAªÉÃzÀ£É
· ªÀZÀ£À
· QÃvÀð£É
· £ÀªÀå
· ¥ÀæUÀw²Ã®
· vÀvÀé¥ÀzÀ
· ¥ÀæzÀ±Àð£À
· DZÀgÀuÉ
· £ÀªÉÇåÃvÀÛgÀ
· ¥Àj¸ÀgÀ
|
· zÀ°vÀ
· §AqÁAiÀÄ
· DvÀäPÀxÉ
· ¥ÀæªÁ¸À
· ¸Á»vÀå
· ¨sÁµÉ
· PÀ£ÀßqÀ
· PÀ£ÁðlPÀ
· §¼Áîj
· ¸ÀܼÀ£ÁªÀÄ
· §zÀÄPÀÄ §gÀºÀ
· vË®¤PÀ
· ¨sÁµÁAvÀgÀ
· DzsÀĤPÀ ¥ÀƪÀð
· £ÀqÀÄUÀ£ÀßqÀ
· ¸ÀªÀÄPÁ°Ã£À
· ¥Àæw¤¢üÃPÀgÀt
· PÀA¨ÁgÀ,
· ¸ÀtÚPÀxÉ
|
· ¥ÁæaãÀ PÀ£ÀßqÀ
· zÁ¸À,
· ºÀjzÁ¸À
· ºÀ¼ÉUÀ£ÀßqÀ
· «ªÀıÉð
· CzsÀåAiÀÄ£À
· ¨ÉÊgÀ¥Àà
· ºÉƸÀUÀ£ÀßqÀ
· £ÀªÉÇÃzÀAiÀÄ
· UÀzÀå
· ¨ÉÃAzÉæ
· C£ÀAvÀªÀÄÆwð
· CrUÀ
· ¸ÁévÀAvÉÆæöåÃvÀÛgÀ
· ²ªÀ¥ÀæPÁ±ï
· PÀªÀ£À
· eÁ£À¥ÀzÀ
· ®APÉñÀ
· zÉòÃAiÀÄvÉ
|
*PhD Thesis List*
ಶನಿವಾರ, ನವೆಂಬರ್ 5, 2016
ಸೋಮವಾರ, ಅಕ್ಟೋಬರ್ 17, 2016
ಉಚಿತ ಆರೋಗ್ಯ ಶಿಬಿರ
ಉಜಿರೆ ಶ್ರೀ ಧ.ಮಂ. ಪ.ಪೂ ಕಾಲೇಜಿನ ಎನ್ಎಸ್ಎಸ್ ಘಟಕವು ದ.ಕ.ಜಿ.ಪಂ ಉನ್ನತೀಕರಿಸಿದ ಸರ್ಕಾರಿ ಹಿ.ಪ್ರಾ ಶಾಲೆಯಲ್ಲಿ ಪ್ರಸಕ್ತ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರದ ಪ್ರಯುಕ್ತ ದಿನಾಂಕ 19 ಅಕ್ಟೋಬರ್ ಬುಧವಾರದಂದು ಮಂಗಳೂರಿನ ಎ.ಜೆ ಶೆಟ್ಟಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ. ಈ ಶಿಬಿರದಲ್ಲಿ ನೇತ್ರ ತಜ್ಞರು, ಚರ್ಮರೋಗ ತಜ್ಞರು, ಮೂಳೆ ತಜ್ಞರು, ಸ್ತ್ರೀ ರೋಗ ತಜ್ಞರು ಮತ್ತು ಸಾಮಾನ್ಯ ಕಾಯಿಲೆಗಳ ವೈಧ್ಯರು ಆಗಮಿಸಲಿದ್ದಾರೆ. ತಪಾಸಣಾ ಶಿಬಿರದಲ್ಲಿ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಲು ಕೋರಿದೆ.ಎನ್ಎಸ್ಎಸ್ ಶಿಬಿರಗಳು ಆದರ್ಶ ಬದುಕಿಗೆ ಮುನ್ನುಡಿಯಿದ್ದಂತೆ- ಎಂ ಶೈಲಜ
ಇಂದಿನ ದಿನಗಳಲ್ಲಿ ಕೇವಲ ಅಂಕ ಗಳಿಕಗೆ ಮಾತ್ರ ಉತ್ತೇಜನ ನೀಡಲಾಗುತ್ತಿದ್ದು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಬದುಕನ್ನು ಯಶಸ್ವಿಯಾಗಿ ನಿರ್ವಹಿಸಲು ತೊಡಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಓದಿನ ದಿನಗಳಲ್ಲಿ ದೊರೆಯುವ ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಶಿಬಿರವನ್ನು ಉದ್ಘಾಟಿಸಿದ ಉಜಿರೆ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಕೆ ಮಾತನಾಡಿ ಎನ್ ಎಸ್ಎಸ್ ಶಿಬಿರಗಳು ಗ್ರಾಮಗಳ ಅಭಿವೃದ್ದಿಯಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿವೆ. ಶಿಬಿರದಲ್ಲಿ ಕೇವಲ ಶ್ರಮದಾನಕ್ಕೆ ಮಾತ್ರ ಒತ್ತು ನೀಡದೆ ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಡಿ ರೇಬೀಸ್ ಕುರಿತು ಅರಿವು ಮೂಡಿಸುವ ಕರಪತ್ರವನ್ನು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಶ್ರೀ ಧ ಮಂ ಪಿ ಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್ ದಿನೇಶ್ ಚೌಟ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಯೋಗೀಶ್ ಪೂಜಾರಿ, ಚಾರ್ಮಾಡಿ ಗ್ರಾ.ಪಂ ಸದಸ್ಯರಾದ ಕೇಶವತಿ ಪಿ, ಉಮೇಶ್ ಗೌಡ, ಶಾಲಾ ಮುಖ್ಯೋಪಾಧ್ಯಾಯ ಕೃಷ್ಣಪ್ಪ ಗೌಡ, ಉಜಿರೆ ಎಸ್ಡಿಎಂ ಆಂಗ್ಲಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ಮನಮೋಹನ ನಾಯ್ಕ್, ಧರ್ಮಸ್ಥಳ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಸೋಮಶೇಖರ ಶೆಟ್ಟಿ, ಮಾತನಾಡಿ ಶುಭಹಾರೈಸಿದರು.
ಶಿಬಿರಾಧಿಕಾರಿಗಳಾದ ನಾಗರಾಜ್ ಬಂಢಾರಿ, ಪ್ರೀತಲ್ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಯಂಸೇವಕರಾದ ಮಣಿಕಂಠ ಸ್ವಾಗತಿಸಿ, ಮಧುರ ವಂದಿಸಿದ ಕಾರ್ಯಕ್ರಮವನ್ನು ಕಾವ್ಯಶ್ರೀ ನಿರೂಪಿಸಿದರು.
ಬುಧವಾರ, ಸೆಪ್ಟೆಂಬರ್ 28, 2016
ಆಳ್ವಾಸ್ ನುಡಿಸಿರಿ 2016ರ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸಿ ಬಿ. ಎನ್. ಸುಮಿತ್ರಾಬಾಯಿ
ನವೆಂಬರ್ 18, 19 ಮತ್ತು 20 ಆಳ್ವಾಸ್ ನುಡಿಸಿರಿ – 2016
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು-ನುಡಿ-ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಯು ನವೆಂಬರ್ ತಿಂಗಳ 18, 19 ಮತ್ತು 20 (ಶುಕ್ರವಾರ, ಶನಿವಾರ ಮತ್ತು ಭಾನುವಾರ) ರಂದು ’ಕರ್ನಾಟಕ : ನಾಳೆಗಳ ನಿರ್ಮಾಣ’ ಎಂಬ ಪ್ರಧಾನ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ರತ್ನಾಕರವರ್ಣಿ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಲಿದೆ. ನವಂಬರ್ ೧೮ ಶುಕ್ರವಾರದಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ನವಂಬರ್ ೨೦ರಂದು ಅಪರಾಹ್ನ ನುಡಿಸಿರಿ ಸಮ್ಮೇಳನವು ಸಂಪನ್ನಗೊಳ್ಳಲಿದೆ. ಸಮ್ಮೇಳನದ ಯಶಸ್ಸಿಗಾಗಿ ಸಿದ್ಧತೆಗಳು ನಡೆಯುತ್ತಿವೆ.
ಭಾನುವಾರ, ನವೆಂಬರ್ 29, 2015
ಶನಿವಾರ, ನವೆಂಬರ್ 28, 2015
ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ನವಂಬರ್ ತಿಂಗಳ 26, 27, 28 ಮತ್ತು 29 ರಂದು ಮೂಡುಬಿದಿರೆಯ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ, ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಈ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ಈ ವರ್ಷವೂ ಕನ್ನಡ ನಾಡು ನುಡಿ ಸಂಸ್ಕೃತಿಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ, ವಿಶೇಷ ಸಾಧನೆಗಳನ್ನು ಮಾಡಿದ ಹತ್ತು ಮಂದಿ ಗಣ್ಯರನ್ನು ಆಳ್ವಾಸ್ ನುಡಿಸಿರಿ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆಶುಕ್ರವಾರ, ನವೆಂಬರ್ 27, 2015
ವಿನೂತನ ಚಿತ್ರಸಂತೆ ಆಳ್ವಾಸ್ ಕಲಾಮೇಳ
ನುಡಿಸಿರಿಯ ಜನಮನಗೆದ್ದ ರಾಜ್ಯಮಟ್ಟದ ಕಲಾಮೇಳ
-ಅಪರ ಉಜಿರೆ
ಸಂಪರ್ಕವನ್ನು ಸಾಧಿಸುವ ಮೂಲಕ ಕಲಾವಿದರ ಕಲಾಕೃತಿಗಳಿಗೆ ಅರ್ಥಪೂರ್ಣ ಬೆಲೆ ಸಿಗುವಂತೆ ಮಾಡಲಾಗಿದೆ. ‘ವರ್ಷವರ್ಷವೂ ಬೆಂಗಳೂರಿನಲ್ಲಿ ನಡೆಯುವ ಚಿತ್ರಸಚಿತೆಯ ಮಾದರಿಯನ್ನಿಟ್ಟುಕೊಂಡು ಈ ಕಲಾಮೇಳವನ್ನು ಆಯೋಜಿಸಿದ್ದೇವೆ. ಕಲಾವಿದರಿಗೆ ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ತಮ್ಮ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಉಚಿತ ಅವಕಾಶವನ್ನು ಮಾಡಿಕೊಡಲಾಗಿದೆ. ಇಲ್ಲಿ ಸುಮಾರು ಎಂಟು ಮಂದಿ ಸ್ಥಳದಲ್ಲಿಯೇ ವ್ಯಕ್ತಿಚಿತ್ರಗಳನ್ನು ರಚಿಸುವ ಕಲಾವಿದರಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.’ ಎನ್ನುತ್ತಾರೆ. ಕಲಾಮೇಳದ ಉಸ್ತುವಾರಿಯನ್ನು ವಹಿಸಿಕೊಂಡಿರುವ ಆಳ್ವಾಸ್ ವಿದ್ಯಾಸಂಸ್ಥೆಯ ಶಿಕ್ಷಕ ಶ್ರೀ ಭಾಸ್ಕರ್ ನೆಲ್ಯಾಡಿಯವರು.
ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರಿಯರಲ್ಲ.
ಆಳ್ವಾಸ್ ನುಡಿಸಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಸಂವಾದದಲ್ಲಿ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀಮೂಡುಬಿದಿರೆ: ದೇಶದಲ್ಲಿ ಅಸಹಿಷ್ಣುತೆ ವಿರೋಧಿಸಿ ಪ್ರಶಸ್ತಿ ಪಾವಾಸು ಮಾಡುತ್ತಿದ್ದಾರೆ. ಆದರೆ ಪ್ರಶಸ್ತಿ ವಾಪಾಸು ಮಾಡದವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆವೇಶದಲ್ಲಿ, ಪೂರ್ವಾಪರವನ್ನಿಟ್ಟುಕೊಂಡು ನಡೆಸುತ್ತಿರುವ ಪ್ರಶಸ್ತಿ ವಾಪಾಸಾತಿ ಸಮೂಹ ಸನ್ನಿಯಾಂತಾಗಿದೆ. ಅರ್ಹತೆ, ಪ್ರೀತಿ, ಗೌರವದಿಂದ ನೀಡುವ ಪ್ರಶಸ್ತಿಯನ್ನು ಹಿಂದಿರುಗಿಸುವ ಪ್ರಕ್ರಿಯೆ ಸರಿಯಲ್ಲ. ಪ್ರಶಸ್ತಿ ಹಿಂದಿರುಗಿಸದೇ ಸುಮ್ಮನಿರುವವರು ನಿಷ್ಕ್ರೀಯರು ಎಂದರ್ಥವಲ್ಲ. ಅವರದ್ದೇ ರೀತಿಯಲ್ಲಿ ತಮ್ಮ ನಿಲುವನ್ನು ಪ್ರಕಟಿಸುತ್ತಿದ್ದಾರೆ. ಇದು ಆಳ್ವಾಸ್ ನುಡಿಸಿರಿ 2015ರ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರ ಸ್ಪಷ್ಟ ನುಡಿ.
ಆಳ್ವಾಸ್ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯ ಸಮಾಜವನ್ನು ಸನ್ಯಾರ್ಗದಲ್ಲಿ ಕೊಂಡೊಯ್ಯುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಇದನ್ನು ತಾನು ಒಪ್ಪುವುದಿಲ್ಲ. ಸಾಹಿತ್ಯ ಪೂರ್ಣಪ್ರಮಾಣದಲ್ಲಿ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬ ವಾದದಲ್ಲಿಯೂ ಹುರುಳಿಲ್ಲ. ಒಂದಿಷ್ಟು ಜನಸಮುದಾಯದ ಮೇಲೆ ಪ್ರಭಾವ ಬೀರಿ ಸಾಮಾಜಿಕ ಕಾಳಜಿಗೆ ಕಾರಣವಾಗಬಹುದು ಎಂದರು.
ಪರಿಷತ್ ನಡೆಸುವ ಸಮ್ಮೇಳನದ ಅಧ್ಯಕ್ಷರಾಗಬೇಕೆಂಬ ಬಯಕೆ ಇತ್ತೆ ಎಂಬ ಪ್ರಶ್ನೆಗೆ, ಅಧ್ಯಕ್ಷನಾಗುವ ವಿಚಾರದಲ್ಲಿ ತನಗೆ ಆಸಕ್ತಿ ಇಲ್ಲ. ಕಳೆದ ಬಾರಿ ತನ್ನ ಹೆಸರು ಕೇಳಿ ಬಂದದ್ದು ಹೌದಾದರೂ ಅದು ಅಭಿಮಾನಿಗಳ ಅಭಿಪ್ರಾಯವಾತ್ತೇ ಹೊರತು ವೈಯಕ್ತಿಕ ಲಾಭಿ ಮಾಡಿಲ್ಲ. ಈ ವಯಸ್ಸಿನಲ್ಲಿ ದೊಡ್ಡ ನಿರೀಕ್ಷೆಗಳನ್ನಿಟ್ಟುಕೊಂಡು ಕೆಲಸ ಮಾಡಬೇಕಾದ ಅಗತ್ಯವೂ ತನಗಿಲ್ಲ ಎಂದ ಅವರು, ನುಡಿಸಿರಿಯ ಅಧ್ಯಕ್ಷತೆ ವಹಿಸಿರುವುದು ಖುಷಿ ನೀಡಿದೆ. ನುಡಿಸಿರಿಯಲ್ಲಿನ ವೈವಿಧ್ಯ, ಸಂಭ್ರಮ ಹಾಗೂ ಜನರ ಪಾಲ್ಗೊಳ್ಳುವಿಕೆ ವಿಶೇಷವಾದುದು ಎಂದರು.
ಸಾಹಿತಿಗಳು ರಾಜಕಾರಣ, ಇನ್ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಸಾಹಿತಿಗಳು ಸಮಾಜದ ಹಿತ ಕಾಯಬೇಕು. ನಮ್ಮ ಸಾಹಿತ್ಯ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು. ಹೇಳುವುದನ್ನು ಸಹಾನುಭೂತಿಯಿಂದ ಹೇಳಿದರೆ ಎಲ್ಲರೂ ಕೇಳುತ್ತಾರೆ. ಬದಲಿಗೆ ಪೂರ್ವಾಪರವನ್ನಿಟ್ಟಕೊಂಡು ಯಾರನ್ನೋ ದೂಷಿಸುವುದು ಸರಿಯಲ್ಲ ಎಂದ ಅವರು ಮಹಾದಾಯಿ ನೀರಾವರಿ ಯೋಜನೆಯ ವಿಚಾರದಲ್ಲಿ ಸ್ಪಷ್ಟವಾದ ಜಲನೀತಿ ಅನುಷ್ಠಾನಕ್ಕೆ ಬರುವುದರೊಂದಿಗೆ ಪರಿಸರ ತಜ್ಞರು, ರಾಜಕಾರಣಿಗಳು ಹಾಗೂ ಸ್ಥಳೀಯ ಹಿತಾಸಕ್ತಿಗಳನ್ನು ಒಗ್ಗೂಡಿಸಿಕೊಂಡು ಸಮಸ್ಯೆಗೊ0ದು ಪರಿಹಾರ ದೊರಕಿಸಿಕೊಡಬೇಕಿದೆ.
ಕನ್ನಡ ಸಾಹಿತ್ಯವನ್ನು ಕನ್ನಡದಲ್ಲಿಯೇ ಓದುವಾಗಿರು ಜೀವಧ್ವನಿ ಇಂಗ್ಲಿಷ್ ಭಾಷೆಗಳಿಗೆ ತರ್ಜುಮೆ ಮಾಡಿದಾಗ ಇರಲು ಸಾಧ್ಯವಿಲ್ಲ. ನಗರೀಕರಣದ ಕನ್ನಡದಿಂದಾಗಿ ನೈಜ ಕನ್ನಡವೆನ್ನುವುದು ಸತ್ತು ಹೋಗಿದೆ. ರಾಜ್ಯದ ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯ ಅನುಷ್ಠಾನವಾಗಬೇಕಿದೆ.
ಸಂವಾದದಲ್ಲಿ ಡಾ. ಮೌಲ್ಯ ಜೀವನರಾಮ್, ಶ್ರೀನಿವಾಸ ಪೇಜತ್ತಾಯ ಉಪಸ್ಥಿತರಿದ್ದರು.
ಕಲೆಗೆ ಕರದ ಹಂಗಿಲ್ಲ
ಈ ಚಿತ್ರಗಾರನ ಕಲಾಕುಂಚಕ್ಕೆ ಕಣ್ಣ ಮುಂದಿನ ವಸ್ತುಗಳೇ ವಿಷಯಗಳು. ನೈಜತೆ ಮತ್ತು ಜನಜೀವನಕ್ಕೆ ಹತ್ತಿರವಾದ ಚಿತ್ರಗಳನ್ನು ಬರೆಯಬೇಕು ಮತ್ತು ಅವು ನೋಡುಗನನ್ನು ಆಕರ್ಷಿಸುವಂತಿರಬೇಕು ಎನ್ನುವುದು ಚಿತ್ರಗಾರ ಗಿರೀಶ್ ಕನಸು. ಕುಂದಾಪುರದ ಬೈಂದೂರು ಮೂಲದ ಗಿರೀಶ್ ಪ್ರತಿಭೆಗೆ ತಾಯಿಯೇ ಸ್ಪೂರ್ತಿ. 27ರ ಹರೆಯದ ಈತನಿಗೆ ಆರಂಬದಲ್ಲಿ ಗೆರೆಗಳ ಆಟವಾಗಿ ತೋರಿದ ಈ ಕಲೆ ಮುಂದೆ ಬದುಕಿನ ದಾರಿಯಾಯಿತು.ಗಿರೀಶ್ ಎಂಬ ಚಿತ್ರಕಾರನ ಕಲಾಕುಂಚ ಆರಂಭಗೊಂಡಿದ್ದು ಬಾಲ್ಯದಲ್ಲಿ. ಯಾರೋ ಪ್ರಾಣಿಗಳನ್ನು ಕೊಲ್ಲಲು ಇಟ್ಟ ಸಿಡಿಮದ್ದು ಈತನ ಕೈಗಳನ್ನು ಕಿತ್ತುಕೊಂಡಿತ್ತು. ಆ ಘಟನೆಯ ನಂತರ ಬಾಲ್ಯದ ಆಸಕ್ತಿಯ ಕಲೆಯನ್ನು ಮುಂದುವರಿಸಲು ಇವರ ಕೈಗಳು ಸಹಕರಿಸಲೇ ಇಲ್ಲ. ಹಾಗೆಂದು ಗಿರೀಶ್ ಛಲ ಬಿಡಲಿಲ.್ಲ ಬಲಗೈಗೆ ಸಾಧ್ಯವಾಗದ್ದನ್ನು ಎಡಗೈಯಲ್ಲಿ ಬರೆಯಲು ಪ್ರಯತ್ನಿಸಿದರು. ಫಲವಾಗಿ ತಾವು ಬಯಸಿದ ಕಲಾಕುಂಚ ಲೋಕಕ್ಕೆ ತನ್ನನ್ನು ಪರಿಚಯಿಸಿಕೊಂಡರು.
ಗಿರೀಶ್ ತಂದೆ ಗಣೇಶ್ ಗಾಣಿಗ ಮತ್ತು ತಾಯಿ ಸೀತಾ. ಪ್ರವೃತ್ತಿಯನ್ನು ವೃತ್ತಿಯಾಗಿ ಆರಿಸಿರುವ ಇವರು ಬಿ.ವಿ.ಎ ಪದವೀಧರರು. ಸದ್ಯ ಕುಂದಾಪುರದ ಬಸೂರಿನ ಶಾರದಾ ಆಂಗ್ಲಮಾದ್ಯಮ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ತಾನು ಕಲಿತ ಕಲೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎನ್ನುವ ಉತ್ಕಟ ಬಯಕೆ ಈತನದು. ಪೆನ್ನು ಮತ್ತು ಬಿಳಿಹಾಳೆಯಲ್ಲಿ ತಪ್ಪಿಲ್ಲದ ಚಿತ್ರ ಬರೆವ ಇವರ ಚಿತ್ರಗಳು ಈ ಬಾರಿಯ ಆಳ್ವಾಸ್ ನುಡಿಸಿರಿಯಲ್ಲಿನ ಆರ್ಟ್ಗ್ಯಾಲರಿಯ ಪ್ರಮುಖ ಆಕರ್ಷಣೆ.
ಹಿಂದೆ ವಾಟರ್ ಪೈಂಟ್ನಲ್ಲಿ ಚಿತ್ರ ರಚಿಸುತ್ತಿದ್ದ ಗಿರೀಶ್ ಸಧ್ಯ ಎಕ್ರಲೇಕ್ ಮೂಲಕ ಚಿತ್ರರಚನೆಯಲ್ಲಿ ತೊಡಗಿದ್ದಾರೆ. ಅರ್ಥಿಕ ಮುಗ್ಗಟ್ಟು ಇವರ ಕಲಾರಚನೆಗಳ ನಿರ್ವಹಣೆಗೆ ತೊಡಕಾಗಿದೆ. “ಚಿತ್ರಕಲಾ ಕ್ಷೇತ್ರ ಉತ್ತಮವಾದರು ಅಲ್ಲಿ ಬದುಕು ಕಟ್ಟಿಕೊಳ್ಳುವುದು ಕಷ್ಟ ಯಾವುದೇ ಸರಕಾರಿ ಶಾಲೆಗಳಲ್ಲಿ ಇತ್ತೀಚಿನ ಹತ್ತು ವರ್ಷದಲ್ಲಿ ಚಿತ್ರಕಲಾ ಶಿಕ್ಷಕ ಹುದ್ದೆಗೆ ನೇಮಕ ವಾಗಿಲ್ಲ ಇದು ಕಲಾಕಾರರ ಬದುಕಿನ ಕುರಿತು ಸರಕಾರದ ನಿಲುವನ್ನು ತೋರಿಸುತ್ತದೆ” ಎನ್ನುತ್ತಾರೆ ಗಿರೀಶ್.
ಗಿರೀಶ್ ಹಲವು ವಸ್ತು ಪ್ರದರ್ಶನಗಳಲ್ಲಿ ಈಗಾಗಲೇ ತಮ್ಮ ಕಲಾರಚನೆಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದು ಜನರ ಮಾನ್ಯತೆ ಪಡೆದಿದೆ. ಈಗ ನುಡಿಸಿರಿ ಅಂಗಳದಲ್ಲಿ ಗಿರೀಶ್ ರಚಿಸಿದ ಚಿತ್ರಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ನುಡಿಸಿರಿ ಆರ್ಟ್ಗ್ಯಾಲರಿಯಲ್ಲಿನ ಇವರ ಚಿತ್ರಗಳು ಜನಾಕರ್ಷಣೆಗೆ ಪಾತ್ರವಾಗಿದೆ. ಈಬಾರಿ ಇವರು ರಚಿಸಿರುವ 40 ಪ್ರಮುಖ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.